Pages

ಅಧ್ಯಾಯ - ೧೩ [13]

 
श्रीमद्भगवद्गीता
ಶ್ರೀಮದ್ಭಗವದ್ಗೀತಾ
त्रयोदशोऽध्यायः
ತ್ರಯೊದಶೋಧ್ಯಾಯಃ
क्षेत्रक्षेत्रज्ञविभागयोगः
ಕ್ಷೇತ್ರಕ್ಷೇತ್ರಜ್ಞವಿಭಾಗಯೊಗಃ

13-00
अर्जुन  उवाच
प्रकृतिं पुरुषं चैव   क्षेत्रं क्षेत्रज्ञमेव च ।
एतद्वेदितुमिच्छामि   ज्ञानं ज्ञेयं च केशव ॥ १३-०
ಅರ್ಜುನ ಉವಾಚ
ಪ್ರಕೃತಿಂ ಪುರುಷಂ ಚೈವ    ಕ್ಷೇತ್ರಂ ಕ್ಷೇತ್ರಜ್ಞಮೇವ ಚ
ಏತದ್ವೇದಿತುಮಿಚ್ಛಾಮಿ    ಜ್ಞಾನಂ ಜ್ಞೇಯಂ ಚ ಕೇಶವ 13.0
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 01 ಆಗಿರುತ್ತದೆ)
 
13-01
श्रीभगवानुवाच
इदं शरीरं कौन्तेय   क्षेत्रमित्यभिधीयते ।
एतद्यो वेत्ति तं प्राहुः   क्षेत्रज्ञ इति तद्विदः ॥ १३-१
ಶ್ರೀ ಭಗವಾನುವಾಚ
ಇದಂ ಶರೀರಂ ಕೌನ್ತೇಯ    ಕ್ಷೇತ್ರಮಿತ್ಯಭಿಧೀಯತೇ
ಏತದ್ಯೋ ವೇತ್ತಿ ತಂ ಪ್ರಾಹುಃ    ಕ್ಷೇತ್ರಜ್ಞ ಇತಿ ತದ್ವಿದಃ 13.1
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 02 ಆಗಿರುತ್ತದೆ)
 
13-02
क्षेत्रज्ञं चापि मां विद्धि   सर्वक्षेत्रेषु भारत ।
क्षेत्रक्षेत्रज्ञयोर्ज्ञानं   यत्तज्ज्ञानं मतं मम ॥ १३-२
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ    ಸರ್ವಕ್ಷೇತ್ರೇಷು ಭಾರತ
ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ    ಯತ್ತಜ್ ಜ್ಞಾನಂ ಮತಂ ಮಮ 13.2
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 03 ಆಗಿರುತ್ತದೆ)
 
13-03
तत्क्षेत्रं यच्च यादृक् च   यद्विकारि यतश्च यत् ।
स च यो यत्प्रभावश्च   तत्समासेन मे श्रृणु ॥ १३-३
ತತ್ಕ್ಷೇತ್ರಂ ಯಚ್ಚ ಯಾದೃಕ್ ಚ    ಯದ್ವಿಕಾರಿ ಯತಶ್ಚ ಯತ್
ಸ ಚ ಯೋ ಯತ್ಪ್ರಭಾವಶ್ಚ    ತತ್ಸಮಾಸೇನ ಮೇ ಶ್ರೃಣು 13.3
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 04 ಆಗಿರುತ್ತದೆ)
 
13-04
ऋषिभिर्बहुधा गीतं   छन्दोभिर्विविधैः पृथक् ।
ब्रह्मसूत्रपदैश्चैव   हेतुमद्भिर्विनिश्चीतैः ॥ १३-४
ಋಷಿಭಿರ್ಬಹುಧಾ ಗೀತಂ    ಛನ್ದೋಭಿರ್ವಿವಿಧೈಃ ಪೃಥಕ್
ಬ್ರಹ್ಮಸೂತ್ರಪದೈಶ್ಚೈವ    ಹೇತುಮದ್ಭಿರ್ವಿನಿಶ್ಚಿತ್ತೈಃ 13.4
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 05 ಆಗಿರುತ್ತದೆ)
 
13-05
महाभूतान्यहङ्कारो  बुद्धिरव्यक्तमेव च ।
इन्द्रियाणि दशैकं च   पञ्च चेन्द्रियगोचराः ॥ १३-५
ಮಹಾಭೂತಾನ್ಯಹಙ್ಕಾರೋ    ಬುದ್ಧಿರವ್ಯಕ್ತಮೇವ ಚ
ಇನ್ದ್ರಿಯಾಣಿ ದಶೈಕಂ ಚ    ಪಞ್ಚ ಚೇನ್ದ್ರಿಯಗೋಚರಾಃ 13.5
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 06 ಆಗಿರುತ್ತದೆ)
 
13-06
इच्छा द्वेषः सुखं दुःखं   सङ्घातश्चेतनाधृतिः ।
एतत्क्षेत्रं समासेन   सविकारमुदाहृतम् ॥ १३-६
ಇಚ್ಛಾ ದ್ವೇಷಃ ಸುಖಂ ದುಃಖಂ    ಸಙ್ಘಾತಶ್ಚೇತನಾಧೃತಿಃ
ಏತತ್ಕ್ಷೇತ್ರಂ ಸಮಾಸೇನ    ಸವಿಕಾರಮುದಾಹೃತಮ್ 13.6
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 07 ಆಗಿರುತ್ತದೆ)
 
13-07
अमानित्वमदम्भित्वम्   अहिंसा क्षान्तिरार्जवम् ।
आचार्योपासनं शौचं   स्थैर्यमात्मविनिग्रहः ॥ १३-७
ಅಮಾನಿತ್ವಮದಮ್ಭಿತ್ವಮ್   ಅಹಿಂಸಾ ಕ್ಷಾನ್ತಿರಾರ್ಜವಮ್
ಆಚಾರ್ಯೋಪಾಸನಂ ಶೌಚಂ    ಸ್ಥೈರ್ಯಮಾತ್ಮವಿನಿಗ್ರಹಃ 13.7
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 08 ಆಗಿರುತ್ತದೆ)

 13-08
इन्द्रियार्थेषु वैराग्यम्   अनहङ्कार एव च ।
जन्ममृत्युजराव्याधिः   दुःखदोषानुदर्शनम् ॥ १३-८
ಇನ್ದ್ರಿಯಾರ್ಥೇಷು ವೈರಾಗ್ಯಮ್   ಅನಹಙ್ಕಾರ ಏವ ಚ
ಜನ್ಮಮೃತ್ಯುಜರಾವ್ಯಾಧಿಃ   ದುಃಖದೋಷಾನುದರ್ಶನಮ್ 13.8
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 09 ಆಗಿರುತ್ತದೆ)
 
13-09
असक्तिरनभिष्वङ्गः   पुत्रदारगृहादिषु ।
नित्यं च समचित्तत्वम्    इष्टानिष्टोपपत्तिषु ॥ १३-९
ಅಸಕ್ತಿರನಭಿಷ್ವಙ್ಗಃ    ಪುತ್ರದಾರಗೃಹಾದಿಷು
ನಿತ್ಯಂ ಚ ಸಮಚಿತ್ತತ್ವಮ್   ಇಷ್ಟಾನಿಷ್ಟೋಪಪತ್ತಿಷು 13.9
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 10 ಆಗಿರುತ್ತದೆ)
 
13-10
मयि चानन्ययोगेन   भक्तिरव्यभिचारिणी ।
विविक्तदेशसेवित्वम्   अरतिर्जनसंसदि ॥ १३-१०
ಮಯಿ ಚಾನನ್ಯಯೋಗೇನ    ಭಕ್ತಿರವ್ಯಭಿಚಾರಿಣೀ
ವಿವಿಕ್ತದೇಶಸೇವಿತ್ವಮ್   ಅರತಿರ್ಜನಸಂಸದಿ 13.10
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 11 ಆಗಿರುತ್ತದೆ)
 
13-11
अध्यात्मज्ञाननित्यत्वं   तत्त्वज्ञानार्थदर्शनम् ।
एतज्ज्ञानमिति प्रोक्तम्   अज्ञानं यदतोन्यथा ॥ १३-११
ಅಧ್ಯಾತ್ಮಜ್ಞಾನನಿತ್ಯತ್ವಂ    ತತ್ತ್ವಜ್ಞಾನಾರ್ಥದರ್ಶನಮ್
ಏತಜ್ ಜ್ಞಾನಮಿತಿ ಪ್ರೋಕ್ತಮ್   ಅಜ್ಞಾನಂ ಯದತೋನ್ಯಥಾ 13.11
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 12 ಆಗಿರುತ್ತದೆ)
 
13-12
ज्ञेयं यत्तत्प्रवक्ष्यामि   यज्ज्ञात्वाऽमृतमश्नुते ।
अनादिमत्परं ब्रह्म   न सत्तन्नासदुच्यते ॥ १३-१२
ಜ್ಞೇಯಂ ಯತ್ತತ್ಪ್ರವಕ್ಷ್ಯಾಮಿ    ಯಜ್ ಜ್ಞಾತ್ವಾಮೃತಮಶ್ನುತೇ
ಅನಾದಿಮತ್ಪರಂ ಬ್ರಹ್ಮ    ನ ಸತ್ತನ್ನಾಸದುಚ್ಯತೇ 13.12
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 13 ಆಗಿರುತ್ತದೆ)
 
13-13
सर्वतः पाणिपादं तत्    सर्वतोऽक्षिशिरोमुखम् ।
सर्वतः श्रुतिमल्लोके  सर्वमावृत्य तिष्ठति ॥ १३-१३
ಸರ್ವತಃ ಪಾಣಿಪಾದಂ ತತ್   ಸರ್ವತೋಕ್ಷಿಶಿರೋಮುಖಮ್
ಸರ್ವತಃ ಶ್ರುತಿಮಲ್ಲೋಕೇ    ಸರ್ವಮಾವೃತ್ಯ ತಿಷ್ಠತಿ 13.13
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 14 ಆಗಿರುತ್ತದೆ)
 
13-14
सर्वेन्द्रियगुणाभासं   सर्वेन्द्रियविवर्जितम् ।
असक्तं सर्वभृच्चैव   निर्गुणं गुणभोक्तृ च ॥ १३-१४
ಸರ್ವೇನ್ದ್ರಿಯಗುಣಾಭಾಸಂ    ಸರ್ವೇನ್ದ್ರಿಯವಿವರ್ಜಿತಮ್
ಅಸಕ್ತಂ ಸರ್ವಭೃಚ್ಚೈವ    ನಿರ್ಗುಣಂ ಗುಣಭೋಕ್ತೃ ಚ 13.14
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 15 ಆಗಿರುತ್ತದೆ)
 
13-15
बहिरन्तश्च भूतानाम्   अचरं चरमेव च ।
सूक्ष्मत्वात्तदविज्ञेयं   दूरस्थं चान्तिके च तत् ॥ १३-१५
ಬಹಿರನ್ತಶ್ಚ ಭೂತಾನಾಮ್   ಅಚರಂ ಚರಮೇವ ಚ
ಸೂಕ್ಷ್ಮತ್ವಾತ್ತದವಿಜ್ಞೇಯಂ    ದೂರಸ್ಥಂ ಚಾನ್ತಿಕೇ ಚ ತತ್ 13.15
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 16 ಆಗಿರುತ್ತದೆ)
 
13-16
अविभक्तं च भूतेषु   विभक्तमिव च स्थितम् ।
भूतभर्तृ च तज्ज्ञेयं   ग्रसिष्णु प्रभविष्णु च ॥ १३-१६
ಅವಿಭಕ್ತಂ ಚ ಭೂತೇಷು    ವಿಭಕ್ತಮಿವ ಚ ಸ್ಥಿತಮ್
ಭೂತಭರ್ತೃ ಚ ತಜ್ ಜ್ಞೇಯಂ    ಗ್ರಸಿಷ್ಣು ಪ್ರಭವಿಷ್ಣು ಚ 13.16
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 17 ಆಗಿರುತ್ತದೆ)
 
13-17
ज्योतिषामपि तज्ज्योतिः   तमसः परमुच्यते ।
ज्ञानं ज्ञेयं ज्ञानगम्यं   हृदि सर्वस्य विष्ठितम् ॥ १३-१७
ಜ್ಯೋತಿಷಾಮಪಿ ತಜ್ಜ್ಯೋತಿಃ   ತಮಸಃ ಪರಮುಚ್ಯತೇ
ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ    ಹೃದಿ ಸರ್ವಸ್ಯ ವಿಷ್ಠಿತಮ್ 13.17
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 18 ಆಗಿರುತ್ತದೆ)
 
13-18
इति क्षेत्रं तथा ज्ञानं   ज्ञेयं चोक्तं समासतः ।
मद्भक्त एतद्विज्ञाय   मद्भावायोपपद्यते ॥ १३-१८
ಇತಿ ಕ್ಷೇತ್ರಂ ತಥಾ ಜ್ಞಾನಂ    ಜ್ಞೇಯಂ ಚೋಕ್ತಂ ಸಮಾಸತಃ
ಮದ್ಭಕ್ತ ಏತದ್ವಿಜ್ಞಾಯ    ಮದ್ಭಾವಾಯೋಪಪದ್ಯತೇ 13.18
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 19 ಆಗಿರುತ್ತದೆ)
 
13-19
प्रकृतिं पुरुषं चैव   विद्ध्यनादी उभावपि ।
विकारांश्च गुणांश्चैव   विद्धि प्रकृतिसंभवान् ॥ १३-१९
ಪ್ರಕೃತಿಂ ಪುರುಷಂ ಚೈವ    ವಿದ್ಧ್ಯನಾದೀ ಉಭಾವಪಿ
ವಿಕಾರಾಂಶ್ಚ ಗುಣಾಂಶ್ಚೈವ    ವಿದ್ಧಿ ಪ್ರಕೃತಿಸಂಭವಾನ್ 13.19
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 20 ಆಗಿರುತ್ತದೆ)
ಪ್ರಕೃತಿ ಮತ್ತು ಪುರುಷ ಇವೆರಡೂ ಅನಾದಿ ಅಂದರೆ ಹುಟ್ಟು ಮತ್ತು ಅಂತ್ಯ ಇಲ್ಲದಿರುವುದು.
ರಾಗ ದ್ವೇಷಾದಿ ವಿಕಾರಗಳು ಅಥವಾ ಬದಲಾವಣೆಗಳು ಮತ್ತು ಸತ್ವ, ರಜ, ತಮ ತ್ರಿಗುಣಾತ್ಮಕ ಎಲ್ಲಾ ಪದಾರ್ಥಗಳು ಕೂಡ ಪ್ರಕ್ರತಿಯಿಂದಲೆ ಉತ್ಪನ್ನವಾದವುಗಳು.
 
ಪ್ರಕೃತಿ ಅಂದರೆ ಜಡ ಜಗತ್ತು ಮತ್ತು ದೇಹ.
ಪುರುಷ ಅಂದರೆ ಚೇತನ ಮತ್ತು ಜೀವಾತ್ಮ.
ವಿಕಾರಗಳು ಅಂದರೆ ದೇಹದಲ್ಲಿ ಆಗುವ ಬದಲಾವಣೆಗಳಾದ ಹುಟ್ಟು, ಹಸಿವು, ಬಾಯಾರಿಕೆ, ಸಾವು;
ಮತ್ತು ಸತ್ವ, ರಜ, ತಮ ಗುಣಗಳು ಪ್ರಕೃತಿಯ ಕಾರ್ಯ ಚಟುವಟಿಕೆಗಳಾಗಿವೆ.
 
13-20
कार्यकारणकर्तृत्वे   हेतुः प्रकृतिरुच्यते ।
पुरुषः सुखदुःखानां   भोक्तृत्वे हेतुरुच्यते ॥ १३-२०
ಕಾರ್ಯಕಾರಣಕರ್ತೃತ್ವೇ    ಹೇತುಃ ಪ್ರಕೃತಿರುಚ್ಯತೇ
ಪುರುಷಃ ಸುಖದುಃಖಾನಾಂ    ಭೋಕ್ತೃತ್ವೇ ಹೇತುರುಚ್ಯತೇ 13.20
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 21 ಆಗಿರುತ್ತದೆ)
ಕಾರ್ಯ ಮತ್ತು ಕರಣಗಳ ಉತ್ಪತ್ತಿಯ ಕಾರಣ ಪ್ರಕೃತಿ,
ಹಾಗೆಯೇ ಸುಖ ದುಃಖಗಳ ಭೋಕ್ತೃತ್ವಕ್ಕೆ ಜೀವಾತ್ಮನು ಕಾರಣ.
 
ಇಲ್ಲಿ ಕಾರ್ಯ ಅಂದರೆ ಬೌತಿಕ ದೇಹ ಮತ್ತು ಇಂದ್ರಿಯಗಳ ಕ್ರಿಯೆಗಳು.
 
ಬೌತಿಕ ದೇಹ ಮತ್ತು ಇಂದ್ರಿಯಗಳು ಅಂದರೆ –
 
ಆಕಾಶ, ವಾಯು, ಅಗ್ನಿ, ಜಲ, ಮತ್ತು ಪೃಥ್ವಿ ಈ ಐದು ಸೂಕ್ಷ್ಮ ಮಹಾಭೂತಗಳು (ಪ್ರಕೃತಿಯ ಐದು ಮೂಲಭೂತ ಅಂಶಗಳು), ಹಾಗೂ
ಶಬ್ದ, ಸ್ಪರ್ಶ, ರೂಪ, ರಸ, ಮತ್ತು ಗಂಧ ಈ ಐದು ತನ್ಮಾತ್ರೆಗಳು (ಪ್ರಕೃತಿಯ ಮೂಲಭೂತ ಮತ್ತು ಸೂಕ್ಷ್ಮ ಅಂಶಗಳು)
ಒಟ್ಟಿಗೆ ಈ ಹತ್ತು ಅಂಶಗಳಿಂದ ಮಾಡಲ್ಪಟ್ಟಿರುವ ದೇಹ.
 
ಪ್ರತಿಯೊಂದು ತನ್ಮಾತ್ರೆಯು ನಮ್ಮ ಪಂಚೇಂದ್ರಿಯಗಳ ಅನುಭವಕ್ಕೆ ಕಾರಣವಾಗಿದೆ:
ಶಬ್ದ: ಕಿವಿಗೆ ಕೇಳಿಸುವ ಧ್ವನಿ (ಆಕಾಶ ತತ್ವಕ್ಕೆ ಸಂಬಂಧಿಸಿದೆ).
ಸ್ಪರ್ಶ: ಚರ್ಮಕ್ಕೆ ಅನುಭವವಾಗುವ ಮುಟ್ಟುವಿಕೆ (ವಾಯು ತತ್ವಕ್ಕೆ ಸಂಬಂಧಿಸಿದೆ).
ರೂಪ: ಕಣ್ಣಿಗೆ ಕಾಣುವ ಆಕಾರ, ಬಣ್ಣ ಮತ್ತು ನೋಟ (ಅಗ್ನಿ/ತೇಜಸ್ಸು ತತ್ವಕ್ಕೆ ಸಂಬಂಧಿಸಿದೆ).
ರಸ: ನಾಲಗೆಗೆ ಸಿಗುವ ರುಚಿ (ಸಿಹಿ, ಹುಳಿ, ಉಪ್ಪು ಇತ್ಯಾದಿ) (ಜಲ ತತ್ವಕ್ಕೆ ಸಂಬಂಧಿಸಿದೆ).
ಗಂಧ: ಮೂಗಿಗೆ ಬರುವ ವಾಸನೆ (ಭೂಮಿ ತತ್ವಕ್ಕೆ ಸಂಬಂಧಿಸಿದೆ).
ಈ ಸೂಕ್ಷ್ಮ ತನ್ಮಾತ್ರೆಗಳು ಒಟ್ಟಾಗಿ ಸೇರಿ ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿ (ಭೂಮಿ) ಎಂಬ ಪಂಚ ಮಹಾಭೂತಗಳಾಗಿ (ಸ್ಥೂಲ ಪ್ರಪಂಚ) ಸೃಷ್ಟಿಯಾಗಿದೆ.
 
ಬುದ್ಧಿ, ಅಹಂಕಾರ, ಮತ್ತು ಮನಸ್ಸು ಈ ಮೂರು ಅಂತಃಕರಣಗಳು,
ಕಿವಿ (ಶ್ರೋತ್ರ), ಚರ್ಮ (ತ್ವಕ್), ಕಣ್ಣು (ಚಕ್ಷುಸ್), ನಾಲಗೆ (ಜಿಹ್ವಾ), ಮತ್ತು ಮೂಗು (ಘ್ರಾಣ) ಈ ಐದು ಜ್ಞಾನೇಂದ್ರಿಯಗಳು, ಮತ್ತು
ವಾಕ್ (ಮಾತು), ಪಾಣಿ (ಕೈಗಳು), ಪಾದ (ಕಾಲುಗಳು), ಉಪಸ್ಥ (ಜನನಾಂಗ), ಮತ್ತು ಪಾಯು (ಗುದ /ವಿಸರ್ಜನಾಂಗ) ಈ ಐದು ಕರ್ಮೇಂದ್ರಿಯಗಳು.
ಒಟ್ಟಿಗೆ ಈ ಹದಿಮೂರು ಅಂಶಗಳು ಕರಣದ ಭಾಗಗಳಾಗಿವೆ.
 
ಬೌತಿಕ ದೇಹ ಮತ್ತು ಇಂದ್ರಿಯಗಳ ಕ್ರಿಯೆಗಳು ಕಾರ್ಯ ಹಾಗೂ ಅವುಗಳ ಪರಿಣಾಮಗಳು ಕರಣದ ಮೂಲಕ ವ್ಯಕ್ತ. ಇವಕ್ಕೆಲ್ಲ ತ್ರಿಗುಣಗಳು ಕಾರಣ.
 
ಜೀವಾತ್ಮ ಶುದ್ಧವಾಗಿದ್ದರೂ ಪ್ರಕೃತಿಯೊಂದಿಗೆ ಅಂದರೆ ದೇಹದೊಂದಿಗೆ ತನ್ನನ್ನು ತಾನು ಗುರುತಿಸಿಕೊಂಡಾಗ, ಆ ದೇಹದ ಸುಖ ದುಃಖಗಳಿಗೆ ತಾನೇ ಕಾರಣವಾಗುತ್ತದೆ.
 
ದೇಹ ಮತ್ತು ಜಗತ್ತಿನ ಚಟುವಟಿಕೆಗಳಿಗೆ ಪ್ರಕೃತಿ ಕಾರಣವಾದರೆ, ಆ ಚಟುವಟಿಕೆಗಳಿಂದ ಉಂಟಾಗುವ ಸುಖ ದುಃಖಗಳನ್ನು ಜೀವಾತ್ಮ ಅನುಭವಿಸುತ್ತದೆ. ಹೀಗೆ ಪ್ರಕೃತಿಯ ಗುಣಗಳೊಂದಿಗೆ ಬೆರೆತ ಜೀವಾತ್ಮವು ಆನಂದಿಸುವ ಮನೋಭಾವದಿಂದ ಬಂಧನಕ್ಕೊಳಗಾಗುತ್ತದೆ.
ಜೀವಾತ್ಮವು ಮೂಲತಃ ಶುದ್ಧ ಮತ್ತು ಚೈತನ್ಯ ಸ್ವರೂಪಿಯಾಗಿರುತ್ತದೆ. ಆದರೆ ಅದು ಪ್ರಕೃತಿಯ (ಭೌತಿಕ ಜಗತ್ತು ಮತ್ತು ದೇಹ) ಸಂಪರ್ಕಕ್ಕೆ ಬಂದಾಗ ಕರ್ಮಬಂಧನಗಳಿಗೆ ಒಳಗಾಗುತ್ತದೆ.
 
ಪ್ರಕೃತಿಯು ಆತ್ಮಕ್ಕೆ ಅನುಭವಗಳನ್ನು ನೀಡುವ ಮಾಧ್ಯಮ. ಜೀವಾತ್ಮವು ತನ್ನ ಶುದ್ಧತೆಯನ್ನು ಮರೆಯದೆ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಿದಾಗ, ಅದು ಮೋಕ್ಷದ ಕಡೆಗೆ ಸಾಗುತ್ತದೆ.

13-21
पुरुषः प्रकृतिस्थो हि   भुङ्क्ते प्रकृतिजान्गुणान् ।
कारणं गुणसङ्गोऽस्य   सदसद्योनिजन्मसु ॥ १३-२१
ಪುರುಷಃ ಪ್ರಕೃತಿಸ್ಥೋ ಹಿ    ಭುಙ್ಕ್ತೇ ಪ್ರಕೃತಿಜಾನ್ಗುಣಾನ್
ಕಾರಣಂ ಗುಣಸಙ್ಗೋಸ್ಯ    ಸದಸದ್ಯೋನಿಜನ್ಮಸು 13.21
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 22 ಆಗಿರುತ್ತದೆ)
ಪ್ರಕೃತಿಯಲ್ಲಿ (ದೇಹದಲ್ಲಿ) ನೆಲೆಸಿರುವ ಜೀವಾತ್ಮ, ಪ್ರಕೃತಿಯ ಗುಣಗಳನ್ನು ಅಂದರೆ ಸುಖ ದುಃಖ ಇಷ್ಟ-ಅನಿಷ್ಟಗಳನ್ನು ಅನುಭವಿಸುತ್ತದೆ.
ಈ ಗುಣಗಳೊಂದಿಗಿನ ಬಾಂಧವ್ಯವೇ ಜೀವಾತ್ಮನ ಒಳ್ಳೆಯ ಮತ್ತು ಕೆಟ್ಟ ಜನ್ಮಗಳ ಕಾರಣವಾಗಿದೆ.
 
ಆತ್ಮ ಮತ್ತು ಅದನ್ನು ಆವರಿಸಿರುವ ಸೂಕ್ಷ್ಮ ಶರೀರವು ನಿಜವಾಗಿ ಶುದ್ಧ ಪ್ರಜ್ಞೆಯಾಗಿದ್ದರೂ, ಅದು ಪ್ರಕೃತಿಯಿಂದ ಉಂಟಾದ ದೇಹವನ್ನು (ಕಾರಣ, ಸೂಕ್ಷ್ಮ, ಮತ್ತು ಸ್ಥೂಲ ಶರೀರಗಳನ್ನು) ನಾನು ಮತ್ತು ನನ್ನದು ಎಂದು ಭಾವಿಸಿ ಆ ಅಹಂಕಾರದಿಂದಾಗಿ, ದೇಹದ ಇಂದ್ರಿಯಗಳ ಮೂಲಕ ಬೌತಿಕ ಸುಖಗಳನ್ನು ಅನುಭವಿಸಲು ಪ್ರಯತ್ನಿಸುತ್ತದೆ.
ಪ್ರಕೃತಿಯ ಮೂರೂ ಗುಣಗಳಾದ, ಒಳ್ಳೆಯದಕ್ಕೆ ಕಾರಣವಾದ ಸತ್ವ, ಉತ್ಸಾಹ ಮತ್ತು ಆಸೆಗೆ ಕಾರಣವಾದ ರಜ, ಅಜ್ಞಾನ ಮತ್ತು ಆಲಸ್ಯಕ್ಕೆ ಕಾರಣವಾದ ತಮ, ಇವುಗಳಲ್ಲಿ ತಲ್ಲೀನವಾದಾಗ ಆತ್ಮವನ್ನು ಆವರಿಸಲ್ಪಟ್ಟ ಸೂಕ್ಷ್ಮ ಶರೀರವು ಅವುಗಳೊಂದಿಗೆ ತಾನು ಒಂದಾಗಿದ್ದೇನೆ ಎಂದು ಭ್ರಮಿಸುತ್ತದೆ.
ಈ ಗುಣಗಳ ಮೇಲಿನ ಆಸಕ್ತಿ ಮತ್ತು ಮೋಹವೇ, ಅಥವಾ ಗುಣ-ಸಂಗವೇ, ಜನ್ಮ-ಮರಣಗಳ ಚಕ್ರಕ್ಕೆ ಮೂಲ ಕಾರಣವಾಗಿದೆ. ಮತ್ತು ಒಳ್ಳೆಯ ಗುಣಗಳಲ್ಲಿ ಇದ್ದರೆ ಉನ್ನತ ಜನ್ಮ, ಕೆಟ್ಟ ಗುಣಗಳಲ್ಲಿ ಇದ್ದರೆ ಕೀಳು ಜನ್ಮ ಲಭಿಸುತ್ತದೆ.

 13-22
उपद्रष्टाऽनुमन्ता च   भर्ता भोक्ता महेश्वरः ।
परमात्मेति चाप्युक्तो   देहेऽस्मिन्पुरुषः परः ॥ १३-२२
ಉಪದ್ರಷ್ಟಾನುಮನ್ತಾ ಚ    ಭರ್ತಾ ಭೋಕ್ತಾ ಮಹೇಶ್ವರಃ
ಪರಮಾತ್ಮೇತಿ ಚಾಪ್ಯುಕ್ತೋ    ದೇಹೇಸ್ಮಿನ್ಪುರುಷಃ ಪರಃ 13.22
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 23 ಆಗಿರುತ್ತದೆ)
ಈ ದೇಹದಲ್ಲಿ ಇರುವ ಆತ್ಮವು ವಾಸ್ತವವಾಗಿ ಪರಮಾತ್ಮನೆ. ಅವನು ಉಪದ್ರಷ್ಟಾ ಅಂದರೆ ಸಾಕ್ಷಿ, ಅನುಮಂತಾ ಅಂದರೆ ಅನುಮತಿ ನೀಡುವವನು, ಭರ್ತಾ ಅಂದರೆ ಪೋಷಕ, ಭೋಕ್ತಾ ಅಂದರೆ ಅನುಭವಿಸುವವನು, ಮಹೇಶ್ವರ ಅಂದರೆ ಸರ್ವೋಚ್ಛ ನಿಯಂತ್ರಕ
ಮತ್ತು ಪರಮಾತ್ಮ ಎಂದು ಹೇಳಲಾಗುತ್ತದೆ. ಅವನು ಈ ದೇಹದಲ್ಲೆ ಇದ್ದರೂ ದೇಹದಿಂದ ಪರ, ಸರ್ವತಾ ಸಂಬಂಧ ರಹಿತನೇ ಆಗಿದ್ದಾನೆ.
 
ಈ ಶ್ಲೋಕವು ನಮ್ಮ ದೇಹದಲ್ಲಿ ಎರಡು ರೀತಿಯ ಪುರುಷರು ಅಥವಾ ಪ್ರಜ್ಞೆಗಳಿದ್ದಾವೆ ಎಂದು ತಿಳಿಸುತ್ತದೆ. ದೇಹದಲ್ಲಿರುವ ಆತ್ಮ ಮತ್ತು ಪರಮಾತ್ಮನ ನಡುವಿನ ವ್ಯತ್ಯಾಸ ಮತ್ತು ಪರಮಾತ್ಮನ ಸ್ವರೂಪವನ್ನು ತಿಳಿಸುತ್ತದೆ.
 
ಜೇವಾತ್ಮ ಅಂದರೆ ದೇಹದ ಸುಖ ದುಃಖಗಳನ್ನು ಅನುಭವಿಸುವವನು.
ಪರಮಾತ್ಮ ಅಂದರೆ ಎಲ್ಲವನ್ನೂ ಸಾಕ್ಷಿಯಾಗಿ ನೋಡುವವನು.
ಮತ್ತು ಪರಮಾತ್ಮನ ಐದು ಲಕ್ಷಣಗಳು ಹೀಗಿವೆ –
1. ಉಪದ್ರಷ್ಟಾ = ಸಾಕ್ಷಿ - ಅವನು ಕೇವಲ ಸಾಕ್ಷಿಯಾಗಿ ನಮ್ಮ ಕರ್ಮಗಳನ್ನು ನೋಡುತ್ತಿರುತ್ತಾನೆ.
2. ಅನುಮಂತಾ = ಅನುಮತಿ ನೀಡುವವನು - ಜೀವಾತ್ಮನು ಏನನ್ನಾದರೂ ಮಾಡಲು ಬಯಸಿದಾಗ, ಪರಮಾತ್ಮನು ಅದಕ್ಕೆ ಅನುಮತಿ ನೀಡುತ್ತಾನೆ. ಮತ್ತು ಕರ್ಮಫಲವನ್ನು ಅನುಭವಿಸಲು ಅನುವು ಮಾಡಿ ಕೊಡುತ್ತಾನೆ.
3. ಭರ್ತಾ = ಪೋಷಕ - ದೇಹ ಮತ್ತು ಜೀವಕ್ಕೆ ಆಧಾರವಾಗಿ ಪೋಷಿಸುತ್ತಾನೆ.
4. ಭೋಕ್ತಾ = ಅನುಭವಿಸುವವನು - ನಿಜವಾದ ಅತೀಂದ್ರಿಯ ಆನಂದವನ್ನು ಅನುಭವಿಸುವವನು.
5. ಮಹೇಶ್ವರ = ಸರ್ವೋಚ್ಛ ಒಡೆಯ - ಅವನು ದೇಹದ ಒಡೆಯ ಮತ್ತು ಪರಮ ಆತ್ಮ.
 
ಒಟ್ಟಿನಲ್ಲಿ ಹೇಳುವುದಾದರೆ ಜೀವಾತ್ಮನು ತನ್ನ ಕರ್ಮಗಳ ಭ್ರಮೆಯಲ್ಲಿ ಸಿಕ್ಕಿಹಾಕಿ ಕೊಂಡಿದ್ದರೆ, ಪರಮಾತ್ಮನು ಹೃದಯದಲ್ಲಿ ನೆಲೆಸಿ, ಅಲಿಪ್ತನಾಗಿ, ಸಾಕ್ಷಿಯಾಗಿ, ಕರ್ಮಫಲಗಳನ್ನು ಒದಗಿಸುತ್ತಾನೆ.
  
13-23
य एवं वेत्ति पुरुषं   प्रकृतिं च गुणैःसह ।
सर्वथा वर्तमानोऽपि   न स भूयोऽभिजायते ॥ १३-२३
ಯ ಏವಂ ವೇತ್ತಿ ಪುರುಷಂ    ಪ್ರಕೃತಿಂ ಚ ಗುಣೈಃಸಹ
ಸರ್ವಥಾ ವರ್ತಮಾನೋಪಿ    ನ ಸ ಭೂಯೋಭಿಜಾಯತೇ 13.23
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 24 ಆಗಿರುತ್ತದೆ)
ಯಾರು ಪುರುಷನನ್ನು ಮತ್ತು ಗುಣಗಳೊಂದಿಗೆ ಪ್ರಕೃತಿಯನ್ನು ತತ್ತ್ವಶಃ ಬೇರೆ ಬೇರೆಯಾಗಿ ಅರ್ಥ ಮಾಡಿಕೊಳ್ಳುತ್ತಾರೊ,
ಅವರು ಎಲ್ಲ ಪ್ರಕಾರದ ಕರ್ತವ್ಯಕರ್ಮಗಳನ್ನು ಮಾಡುತ್ತಾ ಇದ್ದರೂ ಸಹ ಪುನಃ ಜನ್ಮ ಪಡೆಯುವುದಿಲ್ಲ.
 
ತತ್ತ್ವಶಃ = ಮೂಲ ತತ್ತ್ವಗಳ ಆಧಾರದ ಮೇಲೆ, ಸಿದ್ದಾಂತಕ್ಕೆ ಬದ್ದವಾಗಿ, (in principle)
ತತ್ತ್ವತಃ = ವಾಸ್ತವಿಕವಾಗಿ, ನಿಯಮದ ಪ್ರಕಾರ, (actually)
 
ಯಾರು ಪುರುಷನನ್ನು ಅಂದರೆ ಜೀವಾತ್ಮ ಮತ್ತು ಪರಮಾತ್ಮನನ್ನು, ಮತ್ತು (ಸತ್ವ, ರಜ, ತಮ) ಗುಣಗಳೊಂದಿಗೆ ಪ್ರಕೃತಿಯನ್ನು ಈ ರೀತಿಯಾಗಿ ಅರ್ಥ ಮಾಡಿಕೊಳ್ಳುತ್ತಾರೊ, ಅವರು ಎಲ್ಲ ಪ್ರಕಾರದ ಕರ್ತವ್ಯ ಕರ್ಮಗಳನ್ನು ಮಾಡುತ್ತಿದ್ದರೂ ಸಹ ಪುನಃ ಜನ್ಮ ಪಡೆಯುವುದಿಲ್ಲ. ಅಂದರೆ ಮೋಕ್ಷ ಪಡೆಯುತ್ತಾರೆ.
ಕೇವಲ ಪ್ರಕೃತಿ ಅಂದರೆ ಜಡ ಮತ್ತು ಗುಣಗಳಿಂದ ಕೂಡಿದ ದೇಹ, ಮನಸ್ಸು, ಭೌತಿಕ ಜಗತ್ತು, ಮತ್ತು ಪುರುಷನ ಅಂದರೆ ಜ್ಞಾನ ಸ್ವರೂಪ ನಿರ್ಗುಣ ಜೀವಾತ್ಮನ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮಾತ್ರವಲ್ಲದೆ, ಪ್ರಕೃತಿಯ ಗುಣಗಳಾದ ಸತ್ವ, ರಜ, ತಮ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಅರ್ಥ ಮಾಡಿಕೊಂಡು, ಅಜ್ಞಾನದಿಂದ ಭೌತಿಕ ಸುಖ ದುಃಖಗಳಿಗೆ ಒಳಗಾಗದೆ ಇರುವವರು ಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಜವಾಬ್ದಾರಿಯಲ್ಲಿ ಯಾವುದೇ ಕರ್ಮಗಳನ್ನು ಮಾಡುತ್ತಿದ್ದರೂ ಸಹ, ಭೌತಿಕ ಪ್ರಪಂಚದ ಬಂಧನದಿಂದ ಮುಕ್ತರಾಗಿ ಮತ್ತೆ ಹುಟ್ಟು ಸಾವಿನ ಚಕ್ರಕ್ಕೆ ಸಿಲುಕದೆ ಮೋಕ್ಷ ಪಡೆಯಲು ಅರ್ಹರಾಗುತ್ತಾರೆ.
 
13-24
ध्यानेनात्मनि पश्यन्ति   केचिदात्मानमात्मना ।
अन्ये सांख्येन योगेन   कर्मयोगेन चापरे ॥ १३-२४
ಧ್ಯಾನೇನಾತ್ಮನಿ ಪಶ್ಯನ್ತಿ    ಕೇಚಿದಾತ್ಮಾನಮಾತ್ಮನಾ
ಅನ್ಯೇ ಸಾಂಖ್ಯೇನ ಯೋಗೇನ    ಕರ್ಮಯೋಗೇನ ಚಾಪರೇ 13.24
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 25 ಆಗಿರುತ್ತದೆ)
ಪರಮಾತ್ಮನನ್ನು ಕೆಲವರು ಸೂಕ್ಷ್ಮ ಬುದ್ಧಿಯಿಂದ ಧ್ಯಾನದ ಮೂಲಕ ಹೃದಯದಲ್ಲಿ ನುಡುತ್ತಾರೆ (ತಿಳಿದುಕೊಳ್ಳುತ್ತಾರೆ), ಮತ್ತೆ ಕೆಲವರು ಜ್ಞಾನವನ್ನು ಬೆಳೆಸಿಕೊಂಡು, ಇನ್ನು ಕೆಲವರು ನಿಷ್ಕಾಮ ಕರ್ಮದಿಂದ ತಮ್ಮೊಳಗಿರುವ ಪರಮಾತ್ಮನನ್ನು ಕಾಣುತ್ತಾರೆ.
 
ಈ ಶ್ಲೋಕದಲ್ಲಿ ಪರಮಾತ್ಮನನ್ನು ತಲುಪಲು ಬೇರೆ ಬೇರೆ ಮಾರ್ಗಗಳಿವೆ, ಮತ್ತು ಪ್ರತಿಯೊಬ್ಬರ ವ್ಯಕ್ತಿತ್ವ, ಜ್ಞಾನ, ಇಷ್ಟಾನಿಷ್ಟಗಳು (likes and dislikes) ಬೇರೆ ಬೇರೆಯಾಗಿರುವುದರಿಂದ, ಆತ್ಮ ಸಾಕ್ಷಾತ್ಕಾರಕ್ಕೆ ಮುಖ್ಯವಾಗಿ ಮೂರು ಮಾರ್ಗಗಳಿವೆ ಎಂದು ತಿಳಿಸಲಾಗಿದೆ.
 
ಅದರಲ್ಲಿ ಒಂದನೇಯದ್ದು ಧ್ಯಾನ ಯೋಗ: ಸಗುಣ - ಸಾಕಾರ, ನಿರ್ಗುಣ - ನಿರಾಕಾರ, ಇತ್ಯಾದಿಗಳ ಧ್ಯಾನದಲ್ಲಿ ಯಾರಿಗೆ ಆಸಕ್ತಿ, ಶ್ರದ್ಧೆ,  ವಿಶ್ವಾಸ ಮತ್ತು ಯೋಗ್ಯತೆ ಇದೆಯೋ ಅಂತವರು ಅದಕ್ಕನುಸಾರವಾಗಿ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನ ಮಾಡಿ ತಾನೇ - ತನ್ನಿಂದ ತನ್ನಲ್ಲಿಯೇ ಪರಮಾತ್ಮನನ್ನು ಅನುಭವಿಸುತ್ತಾರೆ.
 
ಎರಡನೆಯದ್ದು ಜ್ಞಾನಯೋಗ: ಸಾಂಖ್ಯಾಯೋಗ ಅಂದರೆ ಜ್ಞಾನಯೋಗದಿಂದ ವಿವೇಕ ಮೂಡಿಬರುತ್ತದೆ (ಜ್ಞಾನೋದಯವಾಗುತ್ತದೆ). ವಿವೇಕದಿಂದ ಆತ್ಮ ಮತ್ತು ಪ್ರಕೃತಿಗಳ ನಡುವಿನ ವ್ಯತ್ಯಾಸದ ತಿಳುವಳಿಕೆ ಬರುತ್ತದೆ.
ಸತ್ ಅಂದರೆ ನಿತ್ಯ, ಸರ್ವವ್ಯಾಪಕ, ಸ್ಥಿರ, ಅಚಲ, ಅವ್ಯಕ್ತ ಮತ್ತು ಅಚಿಂತ್ಯವಾಗಿದೆ; ಅಸತ್ ಅಂದರೆ ಚಲ, ಅನಿತ್ಯ, ವಿಕಾರೀ ಮತ್ತು ಪರಿವರ್ತನಶೀಲವಾಗಿದೆ ಎಂಬ ಸತ್ ಮತ್ತು ಅಸತ್ ನ ಅರಿವು ಮೂಡುತ್ತದೆ.
ಇಂತಹ ವಿವೇಕದಿಂದ ಸಂಖ್ಯಾಯೋಗಿಯು ಪ್ರಕೃತಿ ಮತ್ತು ಅದರ ಕಾರ್ಯದ ಬಂಧನವನ್ನು ಕಳಚಿಕೊಂಡು ತಾನೇ ತನ್ನಿಂದ ತನ್ನಲ್ಲಿ ಪರಮಾತ್ಮನನ್ನು ಅನುಭವಿಸುತ್ತಾರೆ.
 
ಮೂರನೆಯದ್ದು ಕರ್ಮಯೋಗ: ಫಲಿತಾಂಶದ ಅಪೇಕ್ಷೆಯಿಲ್ಲದೆ ತನ್ನ ಕರ್ತವ್ಯಗಳನ್ನು ಕೇವಲ ಪ್ರಪಂಚದ ಹಿತಕ್ಕಾಗಿ ಮತ್ತು ಎಲ್ಲ ಜೀವಿಗಳ ಶ್ರೇಯಸ್ಸಿಗಾಗಿ ಮಾಡುವುದರಿಂದ ಸ್ವಯಂಗೆ ಆ ಕ್ರಿಯೆಗಳಿಂದ ಪದಾರ್ಥ, ಶರೀರ ಇತ್ಯಾದಿಗಳ ಬಂದನವಿಚ್ಛೇದವಾಗಿ ತಾನೇ ತನ್ನಿಂದ ತನ್ನಲ್ಲಿಯೇ ಪರಮಾತ್ಮನ ಅನುಭವವಾಗುತ್ತದೆ.
 
ಹೀಗೆ ಮಾರ್ಗಗಳು ವಿಭಿನ್ನವಾದರೂ ಗುರಿ ಒಂದೆ - ಪರಮಾತ್ಮನ ಸಾಕ್ಷಾತ್ಕಾರ. ಪ್ರತಿಯೊಬ್ಬ ವ್ಯಕ್ತಿಯು ಅವರವರ ಸ್ವಭಾವಕ್ಕೆ ತಕ್ಕಂತೆ ಸೂಕ್ತವಾದ ಮಾರ್ಗವನ್ನು ಅನುಸರಿಸ ಬಹುದು. ಆದರೆ ಯಾವುದೇ ಮಾರ್ಗವನ್ನು ಅನುಸರಿಸಿದರೂ ಆಂತರಿಕ ಶುದ್ದೀಕರಣ ಮತ್ತು ನಿಷ್ಕಾಮ ಮನೋಭಾವ ಬೆಳೆಸಿದರೆ ಪರಮಾತ್ಮನ ಅನುಭವ ಪಡೆಯ ಬಹುದು.

13-25
अन्ये त्वेवमजानन्तः   श्रुत्वाऽन्येभ्य उपासते ।
तेऽपि चातितरन्त्येव   मृत्युं श्रुतिपरायणाः ॥ १३-२५
ಅನ್ಯೇ ತ್ವೇವಮಜಾನನ್ತಃ    ಶ್ರುತ್ವಾನ್ಯೇಭ್ಯ ಉಪಾಸತೇ
ತೇಪಿ ಚಾತಿತರನ್ತ್ಯೇವ    ಮೃತ್ಯುಂ ಶ್ರುತಿಪರಾಯಣಾಃ 13.25
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 26 ಆಗಿರುತ್ತದೆ)
 
13-26
यावत्सञ्जायते किञ्चित्   सत्त्वं स्थावरजङ्गमम् ।
क्षेत्रक्षेत्रज्ञसंयोगात्   तद्विद्धि भरतर्षभ ॥ १३-२६
ಯಾವತ್ಸಞ್ಜಾಯತೇ ಕಿಞ್ಚಿತ್   ಸತ್ತ್ವಂ ಸ್ಥಾವರಜಙ್ಗಮಮ್
ಕ್ಷೇತ್ರಕ್ಷೇತ್ರಜ್ಞಸಂಯೋಗಾತ್   ತದ್ವಿದ್ಧಿ ಭರತರ್ಷಭ 13.26
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 27 ಆಗಿರುತ್ತದೆ)

13-27
समं सर्वेषु भूतेषु   तिष्ठन्तं परमेश्वरम् ।
विनश्यत्स्वविनश्यन्तं   यः पश्यति स पश्यति ॥ १३-२७
ಸಮಂ ಸರ್ವೇಷು ಭೂತೇಷು    ತಿಷ್ಠನ್ತಂ ಪರಮೇಶ್ವರಮ್
ವಿನಶ್ಯತ್ಸ್ವವಿನಶ್ಯನ್ತಂ    ಯಃ ಪಶ್ಯತಿ ಸ ಪಶ್ಯತಿ 13.27
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 28 ಆಗಿರುತ್ತದೆ)
 
13-28
समं पश्यन्हि सर्वत्र   समवस्थितमीश्वरम् ।
न हिनस्त्यात्मनाऽत्मानं   ततो याति परां गतिम् ॥ १३-२८
ಸಮಂ ಪಶ್ಯನ್ಹಿ ಸರ್ವತ್ರ    ಸಮವಸ್ಥಿತಮೀಶ್ವರಮ್
ನ ಹಿನಸ್ತ್ಯಾತ್ಮನಾತ್ಮಾನಂ    ತತೋ ಯಾತಿ ಪರಾಂ ಗತಿಮ್ 13.28
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 29 ಆಗಿರುತ್ತದೆ)

13-29
प्रकृत्यैव च कर्माणि   क्रियमाणानि सर्वशः ।
यः पश्यति तथाऽत्मानम्   अकर्तारं स पश्यति ॥ १३-२९
ಪ್ರಕೃತ್ಯೈವ ಚ ಕರ್ಮಾಣಿ    ಕ್ರಿಯಮಾಣಾನಿ ಸರ್ವಶಃ
ಯಃ ಪಶ್ಯತಿ ತಥಾತ್ಮಾನಮ್   ಅಕರ್ತಾರಂ ಸ ಪಶ್ಯತಿ 13.29
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 30 ಆಗಿರುತ್ತದೆ)
ಎಲ್ಲಾ ಕೆಲಸಗಳೂ ಪ್ರಕೃತಿಯಿಂದಲೇ (ದೇಹ, ಮನಸ್ಸು ಮತ್ತು ಇಂದ್ರಿಯಗಳಿಂದ) ನಡೆಯುತ್ತವೆಯೇ ಹೊರತು ಆತ್ಮದಿಂದ ಅಲ್ಲ. ತನ್ನ ನಿಜವಾದ ಸ್ವರೂಪವಾದ ಆತ್ಮವು (ಕ್ಷೇತ್ರಜ್ಞ) ನಿರ್ಲಿಪ್ತ ಮತ್ತು ಯಾವುದೇ ಕೆಲಸವನ್ನು ಮಾಡುವುದಿಲ್ಲ (ಅಕರ್ತೃ) ಎಂದು ಯಾರು ಗ್ರಹಿಸುತ್ತಾರೋ, ಅವರೇ ಸತ್ಯವನ್ನು ಅರಿತ ನಿಜವಾದ ಜ್ಞಾನಿಗಳು.
 
ಪ್ರಕೃತ್ಯಾ = ಪ್ರಕೃತಿಯಿಂದ + ಏವ = ಮಾತ್ರ + = ಮತ್ತು
ಕರ್ಮಾಣಿ = ಎಲ್ಲಾ ಕರ್ಮಗಳು/ಕೆಲಸಗಳು + ಕ್ರಿಯಮಾಣಾನಿ = ಮಾಡಲ್ಪಡುತ್ತವೆ
ಸರ್ವಶಃ = ಎಲ್ಲಾ ವಿಧದಲ್ಲೂ
 
ಯಃ = ಯಾರು + ಪಶ್ಯತಿ = ನೋಡುತ್ತಾರೋ/ತಿಳಿಯುತ್ತಾರೋ
ತಥಾ (ಹಾಗೆಯೇ) + ಆತ್ಮಾನಮ್ = ತನ್ನ ಆತ್ಮವನ್ನು
ಅಕರ್ತಾರಮ್ = ಕರ್ತೃತ್ವವಿಲ್ಲದವನು/ಯಾವುದೇ ಕೆಲಸ ಮಾಡದವನು, ಎಂದು
ಸಃ = ಅವನೇ + ಪಶ್ಯತಿ = ನಿಜವಾಗಿ ಕಂಡವನು
 
ಈ ಶ್ಲೋಕದಲ್ಲಿ ನಿಜವಾದ ಜ್ಞಾನ ಮತ್ತು ಅಜ್ಞಾನದ ನಡುವಿನ ವ್ಯತ್ಯಾಸವನ್ನು ಆತ್ಮ ಮತ್ತು ಪ್ರಕೃತಿಯ (ದೇಹದ) ನಡುವಿನ ವ್ಯತ್ಯಾಸವನ್ನು ಹೇಳುವ ಮೂಲಕ ಅತ್ಯಂತ ಸ್ಪಷ್ಟವಾಗಿ ವಿವರಿಸಲಾಗಿದೆ.
 
ಪ್ರಕೃತಿಯ ಪಾತ್ರ: ಪ್ರಕೃತಿಯೇ ಕಾರ್ಯಕರ್ತೃ. ಮನುಷ್ಯನ ದೇಹ, ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳು ಪ್ರಕೃತಿಯ ತ್ರಿಗುಣ ಗಳಾದ ಸತ್ತ್ವ, ರಜಸ್, ತಮಸ್ ಗಳಿಂದ ಮಾಡಲ್ಪಟ್ಟಿವೆ. ನಾವು ಮಾಡುವ ಪ್ರತಿಯೊಂದು ಶಾರೀರಿಕ ಮತ್ತು ಮಾನಸಿಕ ಕ್ರಿಯೆಗಳು, ಅಂದರೆ ನೋಡುವುದು, ಮಾತನಾಡುವುದು, ನಡೆಯುವುದು, ಯೋಚಿಸುವುದು ಮತ್ತು ಹಸಿವು, ನೀರಡಿಕೆ, ಕೋಪ, ಇತ್ಯಾದಿ, ಪ್ರಕೃತಿಯ ನಿಯಮದಂತೆ ನಡೆಯುತ್ತವೆ.
 
ಆತ್ಮದ ಪಾತ್ರ: ಆತ್ಮನು ಅಕರ್ತ. ನಮ್ಮ ದೇಹದಲ್ಲಿರುವ ಮೂಲ ಚೈತನ್ಯವಾದ ಆತ್ಮವು ಸಂಪೂರ್ಣವಾಗಿ ನಿರ್ಲಿಪ್ತವಾಗಿರುತ್ತದೆ. ಆತ್ಮವು ಶುದ್ಧ ಚೈತನ್ಯ ಸ್ವರೂಪ. ಅದು ಯಾವುದೇ ಕ್ರಿಯೆಯನ್ನು ಮಾಡುವುದಿಲ್ಲ (ಅಕರ್ತೃ), ಮತ್ತು ಯಾವುದೇ ಕರ್ಮದ ಫಲಕ್ಕೆ ಸಿಲುಕುವುದಿಲ್ಲ. ಕನ್ನಡಿಯು ತನ್ನ ಮುಂದೆ ನಡೆಯುವ ದೃಶ್ಯಗಳನ್ನು ಕೇವಲ ಪ್ರತಿಬಿಂಬಿಸುವಂತೆ, ಆತ್ಮವು ದೇಹದಲ್ಲಿ ಕೇವಲ ಸಾಕ್ಷಿಯಾಗಿ ಎಲ್ಲವನ್ನೂ ಗಮನಿಸುತ್ತದೆ ಅಷ್ಟೆ.
 
ಅಜ್ಞಾನ ಮತ್ತು ಅಹಂಕಾರ: ಸಾಮಾನ್ಯ ಮನುಷ್ಯನು ಅಜ್ಞಾನದಿಂದಾಗಿ ತನ್ನನ್ನು ಈ ಭೌತಿಕ ದೇಹ ಮತ್ತು ಮನಸ್ಸಿನೊಂದಿಗೆ ಗುರುತಿಸಿಕೊಳ್ಳುತ್ತಾನೆ. ಹೀಗೆ ಗುರುತಿಸಿಕೊಂಡು ಭ್ರಮೆಗೆ ಒಳಗಾದ ಸಾಮಾನ್ಯ ಮನುಷ್ಯನು, "ನಾನೇ ಎಲ್ಲವನ್ನೂ ಮಾಡುತ್ತಿದ್ದೇನೆ", "ನನ್ನಿಂದಲೇ ಇದೆಲ್ಲವೂ ಸಾಧ್ಯವಾಯಿತು" ಎಂದು ಭಾವಿಸಿ ಅಹಂಕಾರ ಹುಟ್ಟುತ್ತದೆ. ಈ ಅಹಂಕಾರವೇ ಮನುಷ್ಯನನ್ನು ಕರ್ಮದ ಬಂಧನಕ್ಕೆ ಮತ್ತು ಜನನ-ಮರಣಗಳ ಚಕ್ರಕ್ಕೆ ತಳ್ಳುತ್ತದೆ. ಆದರೆ, ವಾಸ್ತವದಲ್ಲಿ ಎಲ್ಲ ಕೆಲಸಗಳನ್ನು ಮಾಡುವುದು ದೇಹ, ಮನಸ್ಸು ಮತ್ತು ಪ್ರಕೃತಿಯ ಗುಣಗಳು.
 
ನಿಜವಾದ ದೃಷ್ಟಿ (ಸ ಪಶ್ಯತಿ): ಜ್ಞಾನಿಯ ಸಾಕ್ಷಿ ಪ್ರಜ್ಞೆ. ಯಾರು ಆಧ್ಯಾತ್ಮಿಕ ಜ್ಞಾನದ ಮೂಲಕ ದೇಹ ಮತ್ತು ಆತ್ಮ ಬೇರೆ ಬೇರೆ ಎಂದು ಅರಿಯುತ್ತಾರೋ, ಅಂತಹ ಜ್ಞಾನಿಗಳು ತಮ್ಮ ದೇಹವನ್ನು ಒಂದು ವಾಹನದಂತೆ ನೋಡುತ್ತಾರೆ. ಅವರು ತಾನು ಕೇವಲ ಸಾಕ್ಷಿಯಾಗಿ ಆ ವಾಹನದ ಒಳಗೆ ಕುಳಿತು ಎಲ್ಲವನ್ನೂ ವೀಕ್ಷಿಸುವವರ ಹಾಗೆ ಇರುತ್ತಾರೆ. ಅವರು "ತಾನು ಏನನ್ನೂ ಮಾಡುತ್ತಿಲ್ಲ, ಪ್ರಕೃತಿಯು ತನ್ನ ಕೆಲಸವನ್ನು ಮಾಡುತ್ತಿದೆ" ಎಂದು ತಿಳಿದಿರುತ್ತಾರೆ. ಇಂತಹವರು ಕರ್ಮಬಂಧನದಿಂದ ಮುಕ್ತರಾಗಿ ಪರಮ ಶಾಂತಿಯನ್ನು ಹೊಂದುತ್ತಾರೆ.
 
ಸಂಕ್ಷಿಪ್ತವಾಗಿ ಹೇಳುವುದಾದರೆ:
ಅಜ್ಞಾನದಿಂದಾಗಿ ಮನುಷ್ಯನು 'ನಾನೇ ಎಲ್ಲವನ್ನೂ ಮಾಡುತ್ತಿದ್ದೇನೆ' ಎಂದು ಅಹಂಕಾರ ಪಡುತ್ತಾನೆ ಮತ್ತು ಸುಖ-ದುಃಖಗಳಂತಹ ಕರ್ಮಫಲಗಳಿಗೆ ಸಿಲುಕಿಕೊಳ್ಳುತ್ತಾನೆ. ಆದರೆ, ಜ್ಞಾನಿಯು ಯಂತ್ರಗಳು ಕಾರ್ಯನಿರ್ವಹಿಸುವಾಗ ಅದರ ಚಾಲಕನು ತಾನೇ ಯಂತ್ರವಲ್ಲ ಎಂದು ತಿಳಿಯುವಂತೆ, ದೇಹವೆಂಬ ಯಂತ್ರವನ್ನು ಪ್ರಕೃತಿ ನಡೆಸುತ್ತಿದೆ ಮತ್ತು ತಾನು ಅದರಲ್ಲಿರುವ ಅಮರ ಆತ್ಮ, ಹಾಗೂ ದೇಹ ಮತ್ತು ಆತ್ಮ ಬೇರೆ ಬೇರೆ ಎಂದು ಅರಿತು, ಕರ್ಮಗಳ ಬಂಧನದಿಂದ ಮುಕ್ತಿಯನ್ನು ಹೊಂದುತ್ತಾನೆ.

 13-30
यदा भूतपृथग्भावम्   एकस्थमनुपश्यति ।
तत एव च विस्तारं   ब्रह्म सम्पद्यते तदा ॥ १३-३०
ಯದಾ ಭೂತಪೃಥಗ್ಭಾವಮ್   ಏಕಸ್ಥಮನುಪಶ್ಯತಿ
ತತ ಏವ ಚ ವಿಸ್ತಾರಂ    ಬ್ರಹ್ಮ ಸಮ್ಪದ್ಯತೇ ತದಾ 13.30
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 31 ಆಗಿರುತ್ತದೆ)
 
13-31
अनादित्वान्निर्गुणत्वात्   परमात्मायमव्ययः ।
शरीरस्थोऽपि कौन्तेय   न करोति न लिप्यते ॥ १३-३१
ಅನಾದಿತ್ವಾನ್ನಿರ್ಗುಣತ್ವಾತ್   ಪರಮಾತ್ಮಾಯಮವ್ಯಯಃ
ಶರೀರಸ್ಥೋಪಿ ಕೌನ್ತೇಯ    ನ ಕರೋತಿ ನ ಲಿಪ್ಯತೇ 13.32
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 32 ಆಗಿರುತ್ತದೆ)
 
13-32
यथा सर्वगतं सौक्ष्म्यात्   आकाशं नोपलिप्यते ।
सर्वत्रावस्थितो देहे   तथाऽत्मा नोपलिप्यते ॥ १३-३२
ಯಥಾ ಸರ್ವಗತಂ ಸೌಕ್ಷ್ಮ್ಯಾತ್   ಆಕಾಶಂ ನೋಪಲಿಪ್ಯತೇ
ಸರ್ವತ್ರಾವಸ್ಥಿತೋ ದೇಹೇ    ತಥಾತ್ಮಾ ನೋಪಲಿಪ್ಯತೇ 13.32
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 33 ಆಗಿರುತ್ತದೆ)
 
13-33
यथा प्रकाशयत्येकः   कृत्स्नं लोकमिमं रविः ।
क्षेत्रं क्षेत्री तथा कृत्स्नं   प्रकाशयति भारत ॥ १३-३३
ಯಥಾ ಪ್ರಕಾಶಯತ್ಯೇಕಃ    ಕೃತ್ಸ್ನಂ ಲೋಕಮಿಮಂ ರವಿಃ
ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ    ಪ್ರಕಾಶಯತಿ ಭಾರತ 13.33
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 34 ಆಗಿರುತ್ತದೆ)
 
13-34
क्षेत्रक्षेत्रज्ञयोरेवम्   अन्तरं ज्ञानचक्षुषा ।
भूतप्रकृतिमोक्षं च   ये विदुर्यान्ति ते परम् ॥ १३-३४
ಕ್ಷೇತ್ರಕ್ಷೇತ್ರಜ್ಞಯೋರೇವಮ್   ಅನ್ತರಂ ಜ್ಞಾನಚಕ್ಷುಷಾ
ಭೂತಪ್ರಕೃತಿಮೋಕ್ಷಂ ಚ    ಯೇ ವಿದುರ್ಯಾನ್ತಿ ತೇ ಪರಮ್ 13.34
(ಕೆಲವು ಆವೃತ್ತಿಗಳಲ್ಲಿ ಇದು ಶ್ಲೋಕ 35 ಆಗಿರುತ್ತದೆ)
 
 
ॐ तत्सदिति श्रीमद्भगवद्गीतासूपनिषत्सु ब्रह्मविद्यायां योगशास्त्रे
श्रीकृष्णार्जुनसंवादे क्षेत्रक्षेत्रज्ञविभागयोगो नाम योदशोऽध्यायः
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀಕ್ರಷ್ಣರ್ಜುನ ಸಂವಾದೆ ಕ್ಷೇತ್ರಕ್ಷೇತ್ರಜ್ಞವಿಭಾಗ ಯೊಗೊ ನಾಮ ತ್ರಯೊದಶೋಧ್ಯಾಯಃ


No comments:

Post a Comment